Saturday, October 24, 2009

ವಿಷಾದ

ದುಡಿಯುವ ಬಗೆ ತಿಳಿಯದ ನಾ
ನಿದಿರೆಯಲ್ಲಿ ಮುಳುಗಿದ್ದೆ.
ಒಮ್ಮೆ ಹಾಗೇ ಸುಮ್ಮನೆ
ಒಂದು ಕನಸುಬಿತ್ತು

ಅಲ್ಲಿ ಜಗದ ಶ್ರೇಷ್ಠ ಕವನಗಳೆಲ್ಲ
ಮೂಡಿ ಬಂತು....
ನಾ ಅವನ್ನೆಲ್ಲ ಲೇಖನಿಯ ಮೂಲಕ
ಕಾಗದಕ್ಕಿಳಿಸಿದೆ

ದಿನವೂ ಮೂಡಿದ ಕನಸುಗಳು
ಹೊಸ ಹೊಸ ಕವನಗಳನ್ನು ಹೊತ್ತು ತಂದವು ,
ನಾ ಪ್ರಸಿದ್ಧನಾಗುತ್ತ ಹೋದೆ

ಈಗ ಅಭಿಮಾನಿಗಳ ಪತ್ರಕ್ಕೆ ಉತ್ತರಿಸಿ ಉತ್ತರಿಸಿ
ಸುಸ್ತಾಗಿ ಬರುವ ನಿದಿರೆಯಲ್ಲಿ
ಕನಸುಗಳಿಲ್ಲ
ಚಿಂತೆಯಲ್ಲಿ ಈಗೀಗ ನಿದ್ದೆಯೂ
ಹತ್ತಿರ ಸುಳಿಯುವುದಿಲ್ಲ!!